ಸುದ್ದಿಬಿಂದು ಬ್ಯೂರೋ ವರದಿ

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಸುಮಾರು 10ಅಡಿ ಉದ್ದದ ಭಾರೀ ಹೆಬ್ಬಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದ್ದು,ಉರಗ ತಜ್ಞ ಹೆಬ್ಬಾವು ಸೆರೆ ಹಿಡಿದ ಮೇಲೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಹಟ್ಟಿಕೇರಿ ಗ್ರಾಮದ  ದಾಮೋದರ ಎಸ್ ನಾಯ್ಕ್ ಅವರ ಮನೆಯ ಸಮೀಪ ಇಂದು ಬೆಳಿಗ್ಗೆ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಇದನ್ನ ಕಂಡ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.ತಕ್ಷಣ ಉರಗ ತಜ್ಞ ಮಹೇಶ ನಾಯ್ಕ ಅವರಿಗೆ ಸ್ಥಳೀಯರು ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೆಬ್ಬಾವನ್ನ ಸೆರೆ ಹಿಡಿದ್ದಾರೆ.

ಬಳಿಕ ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟು ಬಂದಿದ್ದು ಇದರಿಂದಾಗಿ ಸ್ಥಳೀಯರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ/ಪತಿಯ ಉಸಿರು ತೆಗದ ಪತ್ನಿ, ಉಸಿರಿಗಾಗಿ ಹೋರಾಡಿದ ಮಗ…ಬೆಡ್ ಮೇಲೆ ಹಾಯಾಗಿ ಮೊಬೈಲ್ ನೋಡುತ್ತಿದ್ದ ‘ಡಾಕ್ಟರ್‌ಮ್ಮಾ’ “ಇವಳೆಂಥ ತಾಯಿ..?